Saturday 5 October 2013

ಸಾಂಖ್ಯ ಯೋಗ - ನಿರ್ಲೇಪ ಕರ್ಮ


ಭಗವದ್ಗೀತೆಯ ಮುಖ್ಯವಾದ ಉಪದೇಶಗಳಲ್ಲಿ ಇದೂ ಒಂದು. ಇದು ನನಗೆ ಬಹು ಇಷ್ಟವಾದ ಉಪದೇಶ. ಶ್ರೀಕೃಷ್ಣನು ಹಿಂದೆ ನೋಡಿದಂತೆ ಆತ್ಮದ ಬಗ್ಗೆ ಮಾತನಾಡಿ, ಆತ್ಮಕ್ಕೆ ಸಾವಿಲ್ಲ ಹಾಗಾಗಿ ನೀನು ಏನೂ ಚಿಂತಿಸಬೇಡ ಎಂದು ಅರ್ಜುನನಿಗೆ ಹೇಳಿ ನಂತರ ಯುದ್ಧ ಮಾಡು ಇಲ್ಲದಿದ್ದರೆ ನಿನ್ನನ್ನು ಶತ್ರುಗಳು ಹೇಡಿ ಎಂದು ತಿಳಿಯುತ್ತಾರೆ ಎಂದು ಹೇಳುತ್ತಾ ಯುದ್ಧ ಮಾಡಲು ಹುರಿದುಂಬಿಸಿದ. ಈಗ ಹೇಗೆ ಯುದ್ಧಮಾಡಬೇಕು ಎನ್ನುವುದನ್ನು ಹೇಳಲು ಹೊರಟಿದ್ದಾನೆ. ನೋಡೋಣ.

"ಸುಖ ದುಃಖೆ ಸಮೇ ಕೃತ್ವಾ ಲಾಭಾಲಾಭೌ ಜಾಯಾಜಯೌ | ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಯಾಸಿ||2-38||" ಅಂತ. ಹಾಗೆಂದರೆ,

ಸುಖ-ದುಃಖ, ಲಾಭ-ನಷ್ಟ, ಜಯ-ಅಪಜಯ ಇವೆರಡನ್ನೂ ಸಮನಾಗಿ ಸ್ವೀಕರಿಸುವ ಮನಸ್ಸುಳ್ಳವನಾಗಿ, ಯುದ್ಧಮಾಡಲೆಂದೇ ಯುದ್ಧ ಮಾಡು ಆಗ ನಿನಗೆ ಪಾಪ ಅಂಟಿಕೊಳ್ಳುವುದಿಲ್ಲ ಅಂತ. ಇದು ಮೇಲ್ನೋಟಕ್ಕೆ ಸುಲಭದ ಉಪದೇಶದಂತೆ ಕಂಡರೂ ಅನುಭವದ ಸ್ತರದಲ್ಲಿ ನೋಡಿದಾಗ ಬಹಳ ಕಷ್ಟ ಎಂದು ತಿಳಿಯುತ್ತದೆ.

ಈಗ ಒಂದು ಆಟ ಆಡುತ್ತೇವೆ ಆಗ ನಾವು ಅಲ್ಲಿ ಗೆಲ್ಲಲೆಂದೇ ಆಡಿದರೆ ಸೋತಾಗ ತುಂಬಾ ಬೇಸರವಾಗುತ್ತದೆ. ಅದು ಬಿಟ್ಟು Game Spirit ಇಂದ ಆಡಿದಾಗ ಸೋತಮೇಲೆ ಹೆಚ್ಚು ಬೇಸರವಿರುವುದಿಲ್ಲ. ಏಕೆಂದರೆ ನಾವು ಗೆಲುವನ್ನು ನೀರೀಕ್ಷಿಸಿರುವುದಿಲ್ಲ. ಬದಲಾಗಿ ಚೆನ್ನಾಗಿ ಆಡುವ ಮನೋಭಾವ ಇಟ್ಟುಕೊಂಡಿರುತ್ತೇವೆ. ಆಗ ನಮ್ಮ ಎದುರು ಪಕ್ಷದವನು ಚೆನ್ನಾಗಿ ಆಡಿದಾಗ ಚಪ್ಪಾಳೆ ತಟ್ಟುತ್ತೇವೆಯೇ ಹೊರತು ಮತ್ಸರ ಪಡುವುದಿಲ್ಲ! ಇದು ಶ್ರೀಕೃಷ್ಣನು ನಮಗೆ ಹೇಳ ಹೊರಟಿರುವ ಸಂದೇಶ. ನಾವು ಬರೀ ಆಡುವಾಗ ಮಾತ್ರವಲ್ಲದೇ ಪ್ರತಿಯೊಂದು ಕೆಲಸ ಮಾಡುವಾಗ ಕೂಡ, ಕೆಲಸ ಮಾಡುವ ನಿಷ್ಠೆಯಿಂದ ಕೆಲಸ ಮಾಡಬೇಕೆ ಹೊರತು ಅದರ ಫಲಾಪೇಕ್ಷೆಯಿಂದಲ್ಲ. ಇದನ್ನು ಇನ್ನೊಂದು ಸುಪ್ರಸಿದ್ದ ಶ್ಲೊಕದ ಮೂಲಕ ನಮಗೆ ಹೇಳಿದ್ದಾನೆ. ಅದುವೇ,

"ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕಾದಾಚನ | ಮಾ ಕರ್ಮಫಲಹೆತುರ್ಭೂರ್ಮಾ ತೇ ಸಂಗೊಸ್ತು ಅಕರ್ಮಣಿ ||2-47||
ಯೋಗಸ್ತಃ ಕುರು ಕರ್ಮಾಣಿ ಸಂಗಂ ತ್ಯಾಕ್ತ್ವಾ ಧನಂಜಯ |ಸಿಧ್ಯಸಿಧ್ಯೋ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ||2-48 ||"
ಅಂತ. ಹಾಗೆಂದರೆ,

ಮಾಡುವ ಕರ್ಮದಲ್ಲಿ(ಕೆಲಸದಲ್ಲಿ) ನಿನಗೆ ಅಧಿಕಾರ ಇದೆಯೇ ಹೊರತಾಗಿ ಅದರ ಫಲಾಫೇಕ್ಷೆಯಲ್ಲಿ ಅಲ್ಲ. ನಿನಗೆ ಬಂದ ಕರ್ಮಫಲದ ಕಾರಣ ನೀನೆಂದು ನೀನು ತಿಳಿಯಬೇಡ ಮತ್ತು ನಿನಗೆ ಕರ್ಮಫಲಾಧಿಕಾರ ಇಲ್ಲ ಎಂದ ಮಾತ್ರಕ್ಕೆ ಕರ್ಮವನ್ನೇ ತಿರಸ್ಕರಿಸುವ (ಕರ್ಮ ಮಾಡದೇ ಇರುವ) ಅಧಿಕಾರವೂ ಇಲ್ಲ ! ಅಂದರೆ ನೀನು ಕರ್ಮವನ್ನು ತ್ಯಜಿಸುವಂತಿಲ್ಲ, ಕರ್ಮಮಾಡಲೇ ಬೇಕು ಆದರೆ ಅದರ ಫಲಕ್ಕೆ ನೀನು ಕಾರಣ ಅಲ್ಲ ಎಂಬುದನ್ನು ಅರಿತಿರಬೇಕು. 

ಅಲ್ಲ ಸ್ವಾಮಿ, ಕರ್ಮ ಫಲವನ್ನು ಬಯಸದೇ ಕರ್ಮ ಮಾಡಲು ಎಲ್ಲಿಂದ ಉತ್ತೇಜನ ಬರಬೇಕು ?! ಅದಕ್ಕೇ ಕೃಷ್ಣನು ನೀನು ಯೋಗದಿಂದ ಕರ್ಮ ಮಾಡಬೇಕು ಎಂದು ಹೇಳುತ್ತಾನೆ. ಯೋಗದಿಂದ ಎಂದರೆ ಯಾವುದೇ ರಾಗ ದ್ವೇಷಗಳಿಂದ ಪ್ರೇರೇಪಿತವಾಗದೇ ಕೇವಲ ಕರ್ಮ ಮಾಡುವ ಉದ್ದೇಶದಿಂದ ಮಾಡಬೇಕು. ಗೆಲುವು ಸೋಲು ಗಳನ್ನು ಸಮಾನ ಮನೋಭಾವದಿಂದ ನೋಡುವಂತಹ ಸಮಚಿತ್ತ ಮನೊಬುದ್ದಿಗಳು ಇರಬೇಕು.

ಇದರ ಬಗ್ಗೆ ಸ್ವಲ್ಪ ತರ್ಕ ಮಾಡೋಣ. ನಾವು ಬೇರೆ ಗತಿ ಇಲ್ಲದೇ ಎಲ್ಲಾ ಕರ್ಮಗಳನ್ನು ಮಾಡಲೇ ಬೇಕು. ಅವನ್ನು ತಪ್ಪಿಸಿಕೊಳ್ಳುವಂತಿಲ್ಲ. ಆದರೆ ಅವುಗಳನ್ನು ನಾವು ಅಂಟಿಸಿಕೊಳ್ಳಬಾರದು. ಹೇಗೆಂದರೆ ಕಮಲ ಪತ್ರವು ನೀರಿನಲ್ಲೇ ಇದ್ದರೂ ಅದು ನೀರಿಗೆ ಹೇಗೆ ಅಂಟಿಕೊಂಡಿರುವುದಿಲ್ಲವೋ ಹಾಗೆ ನಾವು ಕೂಡ ಈ ಸಮಾಜ/ಸಂಸಾರ ದಲ್ಲಿ ಇದ್ದುಕೊಂಡು ಅದಕ್ಕೆ ಅಂಟಿಕೊಳ್ಳದೇ ಇರುವ Technique ಅನ್ನು ಕಲಿಯಬೇಕು. ಆಗ ನಮಗೆ ಯಾವುದರ ಮೇಲೆಯೂ ವ್ಯಾಮೋಹ ಇರುವುದಿಲ್ಲ. ನಾವು ಮಾಡುವ ಕೆಲಸಗಳೆಲ್ಲಾ ಲೋಕ ಸಂಗ್ರಹ ರೂಪದಿಂದ ಮಾಡಬೇಕು. ಆಗ ನಾನು ಈ ಕೆಲಸಗಳನ್ನು ಮಾಡುತ್ತಿರುವೆ ಎನ್ನುವ ಅಹಂಕಾರ ಇರುವುದಿಲ್ಲ. ಅಹಂಕಾರ ವಿಮೋಚನೆಗೆ ಇದು ಒಂದು ಒಳ್ಳೆಯ ಮಾರ್ಗ.

ಇದು ಹೇಳಿದಷ್ಟು ಸುಲಭದ ಕೆಲಸವಲ್ಲ. ಅನುಭವದಿಂದ ಸಾಧಿಸಬೇಕಾದರೆ ತುಂಬಾ ಸಾಧನೆ ಮಾಡಬೇಕು ಬೇಕು. ಆದರೂ ಹೀಗೆ ನಿರ್ಲೇಪ ಕರ್ಮ ಮಾಡುವುದರಿಂದ ನಾವು ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಬಹುದು. ಹೀಗೆ ನಿರ್ಲೇಪ ಕರ್ಮ ಮಾಡುವವನು ಸ್ಥಿತಪ್ರಜ್ಞ ನಾಗಿರಬೇಕು. ಅಥವಾ ಸ್ಥಿತಪ್ರಜ್ಞಾನಾದವನು ನಿರ್ಲೇಪ ಕರ್ಮ ಮಾಡುತ್ತಾನೆ. ಸ್ಥಿತಪ್ರಜ್ಞ ನ ಲಕ್ಷಣಗಳೇನು ?? ಇದನ್ನು ಮುಂದೆ ನೋಡೋಣ.

1 comment:

  1. RNM V2K ನಿಂದ ನಿಮ್ಮನ್ನು ರಕ್ಷಿಸಲು ನಮ್ಮ ಲ್ಯಾಬ್ ಯಶಸ್ವಿ ಪರಿಹಾರವನ್ನು ಹೊಂದಿದೆ. ವೈಯಕ್ತಿಕ RNM & V2K EMF ಜಾಮರ್ (ಅಥವಾ ವೈಯಕ್ತಿಕ ಸಿಗ್ನಲ್ ಜ್ಯಾಮರ್): EM ಆಯುಧಗಳು ಮತ್ತು EM ಕಿರುಕುಳ ನೀಡುವ ಸಾಧನಗಳು (ಮತ್ತು ರೇಡಿಯೊನಿಕ್ಸ್), EM ಜಾಮರ್‌ಗಳು ಮತ್ತು EM ಜಾಪರ್‌ಗಳಂತಹ ನಮ್ಮ ಅಂಗಡಿಯ ವ್ಯಾಪಕ ಸಂಶೋಧನೆಗಳು. "ಸಿಗ್ನಲ್ ಜಾಮರ್" ಅನ್ನು ಸಹ ಹೀಗೆ ಉಲ್ಲೇಖಿಸಲಾಗಿದೆ: ಸಿಗ್ನಲ್ ಜಾಪರ್ , ಸಿಗ್ನಲ್ ಬ್ಲಾಕರ್, ಸಿಗ್ನಲ್ ಸ್ಕ್ರಾಂಬ್ಲರ್, ಸಿಗ್ನಲ್ ಕ್ರ್ಯಾಮರ್, ಸಿಗ್ನಲ್ ಅಬ್ಸ್ಟ್ರಕ್ಟರ್, ಸಿಗ್ನಲ್ ಸ್ಕ್ವಾಷರ್, ಸಿಗ್ನಲ್ ಡಿಸ್ಟ್ರಾಯರ್, ಸಿಗ್ನಲ್ ಡಿಆಕ್ಟಿವೇಟರ್.TEMFJ- ಮಾದರಿಯ ಸಾಧನಗಳು, ನಾವು ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಎಲ್ಲಾ RF ಟ್ರಾನ್ಸ್‌ಮಿಟಿಂಗ್ ಸಾಧನಗಳಂತೆ, ನಮ್ಮ ನೀತಿಗಳ ವೆಬ್‌ಪುಟದಲ್ಲಿ ವ್ಯಾಖ್ಯಾನಿಸಲಾದ ನಮ್ಮ RF ನೀತಿಗಳನ್ನು ಆಧರಿಸಿದೆ ( ನೀತಿಗಳು.htm). TEMFJ ಅನ್ನು ಕಿರಿದಾದ ಬ್ಯಾಂಡ್‌ವಿಡ್ತ್‌ನಲ್ಲಿ ದ್ವಿದಳ ಧಾನ್ಯಗಳ ತಂತಿಗಳನ್ನು ಕಳುಹಿಸಲು ವಿನ್ಯಾಸಗೊಳಿಸಲಾಗಿದೆ (ಆಯ್ಕೆ ಮಾಡಿದ ಕೇಂದ್ರ ಆವರ್ತನ 1MHz - 3GHz; BW 0.1% ಸೆಂಟರ್ ಫ್ರೀಕ್ ಅಥವಾ 10KHz, ಯಾವುದು ಶ್ರೇಷ್ಠವೋ ಅದು) ಜಾಮ್ (ಒಬ್ಬರ ದೇಹದ ತಕ್ಷಣದ ಪ್ರದೇಶದಲ್ಲಿ) ಇಎಮ್ ಟ್ರಾನ್ಸ್‌ಮಿಟರ್‌ಗಳನ್ನು ಅಪರಾಧ ಮಾಡಲು ವಿನ್ಯಾಸಗೊಳಿಸಲಾಗಿದೆ. , ಕಣ್ಗಾವಲು ಸಾಧನಗಳು, ಮೈಕ್ರೊವೇವ್ ನಿಯಂತ್ರಕಗಳು ಮತ್ತು ಇತರರು - ಹೊಸ EM ಸಾಧನಗಳು ಸಹ. ಪೋರ್ಟಬಲ್ ಮತ್ತು ಧರಿಸಲಾಗುತ್ತದೆ ಅಥವಾ ದೇಹದ ಮೇಲೆ ಅಥವಾ ಹತ್ತಿರ ಸಾಗಿಸಲಾಗುತ್ತದೆ. ಇಎಮ್ ಸಿಗ್ನಲ್ ಜ್ಯಾಮರ್‌ಗಳನ್ನು ಎಲೆಕ್ಟ್ರಾನಿಕ್ ಆಯುಧಗಳಾಗಿ ಕಾರ್ಯನಿರ್ವಹಿಸಲು ಅಥವಾ ಕಾನೂನುಬದ್ಧವಾಗಿ ಪರವಾನಗಿ ಪಡೆದ ಟ್ರಾನ್ಸ್‌ಮಿಟರ್‌ಗಳನ್ನು ಜ್ಯಾಮ್ ಮಾಡಲು ವಿನ್ಯಾಸಗೊಳಿಸಲಾಗಿಲ್ಲ ಎಂಬುದನ್ನು ಗಮನಿಸಿ. ಜಾಮರ್‌ಗಳು ಯಾವುದೇ ಬುದ್ಧಿವಂತಿಕೆಯನ್ನು ರವಾನಿಸುವುದಿಲ್ಲ ಆದರೆ ಎಲೆಕ್ಟ್ರಾನಿಕ್ ಆಯುಧದ ಆಕ್ಷೇಪಾರ್ಹ ಸಂಕೇತಗಳನ್ನು ಮರೆಮಾಚಲು ಬಿಳಿ ಶಬ್ದ ಅಥವಾ ಗುಲಾಬಿ ಶಬ್ದದಿಂದ ಸಾಮಾನ್ಯವಾಗಿ ಮಾಡ್ಯುಲೇಟ್ ಮಾಡಲಾದ ಹೆಚ್ಚಿನ ಆವರ್ತನ ವಾಹಕ ಸಂಕೇತವನ್ನು ಮಾತ್ರ ರವಾನಿಸುತ್ತದೆ (ನೀವು EM ಬಿಳಿ ಶಬ್ದವನ್ನು ಕೇಳಿದರೆ, ಅದು ದೂರದ ಮಳೆಯಂತೆ ಧ್ವನಿಸುತ್ತದೆ; EM ಗುಲಾಬಿ ಶಬ್ದವು ಬಿಳಿ ಶಬ್ದವನ್ನು ಹೋಲುತ್ತದೆ ಆದರೆ ಫಿಲ್ಟರಿಂಗ್ ಅನ್ನು ಅವಲಂಬಿಸಿ ಹೆಚ್ಚಿನ ಅಥವಾ ಕಡಿಮೆ ಸಂಯೋಜಿತ ಪಿಚ್ ಅನ್ನು ಹೊಂದಿರುತ್ತದೆ). ಇದಕ್ಕೆ ವ್ಯತಿರಿಕ್ತವಾಗಿ, ಎಲೆಕ್ಟ್ರಾನಿಕ್ ಟ್ರಾನ್ಸ್‌ಮಿಟರ್ ಆಯುಧಗಳು ನಿರ್ದಿಷ್ಟ ನಿಯಂತ್ರಣ ಸಂಕೇತಗಳು ಅಥವಾ ಡೇಟಾ ಸಂಕೇತಗಳನ್ನು ರವಾನಿಸುತ್ತವೆ, ಇವುಗಳನ್ನು ಸಾಮಾನ್ಯವಾಗಿ ವ್ಯಕ್ತಿ(ಗಳು) (ಸಾಮಾನ್ಯವಾಗಿ ಉದ್ದೇಶಿತ ವ್ಯಕ್ತಿ), ಪ್ರಾಣಿ(ಗಳು) ಮತ್ತು/ಅಥವಾ ಉಪಕರಣಗಳಲ್ಲಿ ಹಾನಿಕಾರಕ ಅಭಿವ್ಯಕ್ತಿಗಳನ್ನು ಉಂಟುಮಾಡಲು ವಿನ್ಯಾಸಗೊಳಿಸಲಾಗಿದೆ. ಹಾನಿಕಾರಕ EMF ಗಳು ಆಕ್ರಮಿಸಬಹುದಾದ ಬ್ಯಾಂಡ್‌ವಿಡ್ತ್ ಅಗಾಧವಾಗಿರುವುದರಿಂದ, ಈ ಅಗಾಧವಾದ ವಿದ್ಯುತ್ಕಾಂತೀಯ ಸ್ಪೆಕ್ಟ್ರಮ್‌ನಲ್ಲಿ ನಿಮಗೆ ಹಾನಿಕಾರಕ ಸಂಕೇತಗಳು ಎಲ್ಲಿವೆ ಎಂಬುದನ್ನು ನಿರ್ಧರಿಸುವುದು ಮುಖ್ಯವಾಗಿದೆ. ಆದ್ದರಿಂದ, ನೀವು ಮೊದಲು ಕಸ್ಟಮೈಸ್ ಮಾಡಿದ ಸಾಧನವಾಗಿ ಡೈರೆಕ್ಷನಲ್ ಸಿಗ್ನಲ್ ಸಾಮರ್ಥ್ಯ ಅಥವಾ ಸಿಗ್ನಲ್ ತ್ರಿಕೋನ ಸಾಧನದ ಖರೀದಿಯನ್ನು ಬಲವಾಗಿ ಪರಿಗಣಿಸಬೇಕು ಇದರಿಂದ ನೀವು ಆಕ್ಷೇಪಾರ್ಹ ಸಿಗ್ನಲ್‌ಗಳನ್ನು ರೆಡ್-ಹ್ಯಾಂಡ್‌ನಿಂದ ಹೊರತೆಗೆಯಬಹುದು, ಅವುಗಳ ಆವರ್ತನ(ಐಎಸ್) (ಬ್ಯಾಂಡ್‌ವಿಡ್ತ್)[5.5 ಕೆ.ಜಿ.]
    ನಮ್ಮ ಲ್ಯಾಬ್ ಲಿಂಕ್ ಇಲ್ಲಿದೆ https://sandria.company.site/

    ReplyDelete